Monday 30 November 2020

ಕರ್ತವ್ಯ kartavya

Perfect explanation

Imaginative poem
ಕಾರ್ಗತ್ತಲಲ್ಲಿ ಬೆಳ್ಳನ ಬೆಳದಿಂಗಳಾ 

ಬೆಳಕನ್ನು ಕಂಡಂತೆ 
ಮುಂದೊಂದು ದಿನದ ಬಾಳಿನಾಸರೆಯಾ 
ಮಗನಲ್ಲಿ ಕಂಡೆ 


ಪುತ್ರರತ್ನನಿಗೆ ಏನೆಲ್ಲ 

ಸವಲತ್ತುಗಳ ಧಾರೆ ಎರೆದೆ 
ನಮಗೆಲ್ಲ ದಾರಿದೀಪನಾಗುವ 
ದಿನಗಳನೇ ಕಾತರದಿಂದ ಕಾದೆ


ವಿದ್ಯಾವಂತನಾದಂತೆ 

ಮಗನಲ್ಲಿ ಬದಲಾವಣೆಗಳನು ಕಂಡೆ
ಅವನ ಜೀವನದ ಶೈಲಿಯಲ್ಲಿ 
ಮಾರ್ಪಾಟುಗಳನು ಕಂಡೆ 


ಏರುತ್ತಿರುವ ಅಸುರಕ್ಷಿತ ದಿನಗಳಲಿ

ಇಳಿಯುತ್ತಿರುವ ತಂದೆ ತಾಯಿಯ ಮೇಲಿನ 
ಪ್ರೀತಿ ವಿಶ್ವಾಸಗಳನು 
ಕಾಣಲು ಇಷ್ಟವಿರದಿದ್ದರೂ ಕಂಡೆ 


ಬಾಳಿನಾಸರೆಗೆಂದು 

ಮಕ್ಕಳ ಏಳಿಗೆಗಳಲಿ 
ಅವರ ಆಕಾಂಕ್ಷೆಗಳಲಿ 
ನಿಮ್ಮ ಸ್ವಾರ್ಥವನ್ನು ಕಾಣದಿರಿ 
ಕರ್ತವ್ಯ ಮಾತ್ರ ಪಾಲಿಸಿರಿ
end- ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment